ಚಿಂತಾಮಣಿಯಲ್ಲಿ ರಂಗನ್ ಲವ್ ಸ್ಟೋರಿ ಗೆ ಮಹೂರ್ತ
Posted date: 24 Wed, Feb 2016 – 12:21:30 AM

ಕೈ ತುತ್ತು ಹಾಗೂ ೭೪೧೧೧೯೦೪೨೯ ನಂಥ ವಿಭಿನ್ನ ಕಥಾ ಹಂದರವುಳ್ಳ ಚಿತ್ರಗಳನ್ನು ನಿರ್ದೇಶಿಸಿರುವ ರಾಜೀವ್ ಕೃಷ್ಣ ಗಾಂಧಿ ಇದೀಗ ಮತ್ತೊಂದು ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದಾರೆ.  ಮರ್ಯಾದಾ ಹತ್ಯೆಯಂಥ ಸಾಮಾಜಿಕ ಪಿಡುಗಿನ ಹಿನ್ನಲೆಯಲ್ಲಿ ಒಂದು ವಿಭಿನ್ನವಾದ ಪ್ರೇಮಕಥೆಯನ್ನು ಹೊಂದಿರುವ ರಂಗನ್ ಲವ್ ಸ್ಟೋರಿ ಹೆಸರಿನ ಈ ಚಿತ್ರದ ಮುಹೂರ್ತ ಸಮಾರಂಭ ಕಳೆದ ಸೋಮವಾರ ನಡೆಯಿತು.  ಚಿಂತಾಮಣಿಯು ಶ್ರೀ ಸತ್ಯನಾರಾಯಣಸ್ವಾಮಿ ದೇವಸ್ಥಾನದಲ್ಲಿ ನಡೆದ ಚಿತ್ರೀಕರಣ ಆರಂಭದ ದೃಶ್ಯಕ್ಕೆ ನಾಗರಾಜ್ ಕ್ಲಾಪ್ ಮಾಡಿದರು.  ಆನಂದಶರ್ಮ ಅವರು ಕ್ಯಾಮರಾ ಸ್ವಿಚ್ ಆನ್ ಮಾಡಿದರು.
ಮದ್ಯಮ ವರ್ಗದ ಯುವಕ ಯುವತಿಯರು ಪ್ರೀತಿ-ಪ್ರೇಮದ ಬಲೆಗೆ ಬಿದ್ದಾಗ ಅದರಿಂದುಂಟಾಗುವ ತೊಂದರೆ, ಕಷ್ಟಗಳು, ಊರಿನಲ್ಲಿ ಗಲಾಟೆಗಳು ಹಾಗೂ ಮರ್ಯಾದಾ ಹತ್ಯೆಯಂಥ ಸಾಮಾಜಿಕ ಪಿಡುಗು ಈ ಎಲ್ಲಾ ಅಂಶಗಳನ್ನೊಳಗೊಂಡ ಕಥೆ ಇದಾಗಿದೆ.  ಅಲ್ಲದೆ ಕ್ರೈಂ ಹಾಗೂ ಪಾತಕ ಜಗತ್ತನ್ನು ಪ್ರತಿಬಿಂಬಿಸುವಂಥ ಕೆಲ ವಿಷಯಗಳು ಕೂಡ ಈ ಚಿತ್ರದಲ್ಲಿವೆ. ಚಿತ್ರಕಥೆಗೆ ಪೂರಕವಾದಂತೆ ಕೇವಲ ೩ ಹಾಡುಗಳು ಮಾತ್ರ ಈ ಚಿತ್ರದಲ್ಲಿದ್ದು ವಿನೋದ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ.
    ಕಾಡುಮಲ್ಲೇಶ್ವರ ಬೆಟ್ಟ, ಕೈಲಾಸಗಿರಿ, ಆಜಾದ್ ಚೌಕದ ಮನೆ ಹಾಗೂ ಚಿಂತಾಮಣಿ ನಗರದ ಸುತ್ತಮುತ್ತ ಸುಮಾರು ೩೦ ದಿನಗಳ ಕಾಲ ರಂಗನ್ ಲವ್ ಸ್ಟೋರಿ ಯನ್ನು ಚಿತ್ರೀಕರಿಸಲಾಗುವುದು ಎಂದು ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಬರೆದು ನಿರ್ದೇಶನ ಮಾಡುತ್ತಿರು  ರಾಜೀವ್ ಕೃಷ್ಣಗಾಂಧಿ ತಿಳಿಸಿದ್ದಾರೆ.
    ಅಮೃತ ಚಿತ್ರ ಸಂಸ್ಥೆಯಲ್ಲಿ ಬಿ.ಆರ್.ಭಾಗ್ಯರಂಗನಾಥ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಆರ್.ಪ್ರಮೋದ್ ಛಾಯಾಗ್ರಹಣ, ವಿನೋದ್ ಸಂಗೀತ್, ಎಸ್.ಎಸ್.ಕೆ.ಸಂದೀಪ್ ನೃತ್ಯ, ಆರ.ಡಿ.ರವಿ ಸಂಕಲನ, ರಾಜೀವ್ ಕೃಷ್ಣ ಸಾಹಿತ್ಯ  ಬಾಬು ಕಲಾನಿರ್ದೇಶನವಿದೆ.  ಕಿರಣ್‌ರಾಜ್, ಶೃತಿಲಯ, ರಾಜೇಂದ್ರ, ಕಿಲ್ಲರ್ ವೆಂಕಟೇಶ್, ಜ್ಯೋತಿಮೂರುರು, ನಾರಾಯಣಸ್ವಾಮಿ, ವೆಂಕಿ, ಮಹಂತೇಶ್, ವಿಕ್ರಂ ಸೂರಿ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed